Monday, July 15, 2013

ರೀತಿ ನೀತಿ


ಬದುಕಿದ್ದರೇನು ಫಲ...?
ಇದ್ದೂ ಉಪಯೋಗವಿಲ್ಲ,
ಸಮಾಜಕ್ಕೆ, ಪೋಷಕರಿಗೆ ಏನೂ
ಉಪಯೋಗವಿಲ್ಲದವನಿದ್ದೇನು ಫಲ??


ಅವನಿದ್ದೂ ಸತ್ತಂತೆ.
ಜೀವಂತ ಶವ!!!
ಏನೂ ಸಾಧಿಸದವ,
ಕಲ್ಪನೆಗೂ ಮೀರಿದ ಕೀಳು ಮನುಷ್ಯನಂತೆ..!


ಭೂಮಿಗೆ ಭಾರ,
ಸುಮ್ಮನೆ ದವಸ ಧಾನ್ಯಗಳ ಹರಣ
ಹನವಿಲ್ಲದ ಕುದುರೆಯಂತೆ
ಗುರಿ ಇರದ ಜೀವನ ಅವನದ್ದು.


ಜೀವನವೆಂಬ ರಣರಂಗದಲ್ಲಿ
ಕೈಲಾಗದವನಂತೆ ಕುಳಿತು
ಅತ್ತ ಯುಧಕ್ಕಿಲ್ಲ,ಇತ್ತ ಏನಕ್ಕೂ
ಪ್ರಯೋಜನವಿಲ್ಲದವನದ್ದು ಕೀಳು ಜನುಮ!!


ಊಟ ತಿಂದ ಮನೆಯ
ಕಾಯುವುದು ನೀಯತ್ತು ಪ್ರಾಣಿಯ ಗುಣ
ಹುಟ್ಟಿ, ಬೆಳೆದು ಬಂದ ಮನೆಗೆ
ಏನೂ ಕೊಡದೆ ಬದುಕ್ಕಿದ್ದರೇನು ಫಲ??


ಎಂಥ ಜೀವನ?????
ಯಾವುದರಲ್ಲೂ ಮುಂದಿಲ್ಲ...
ಯಾವ ಕೆಲಾವೂ ಬರುವುದಿಲ್ಲ
ಹೀಗಿದ್ದರೆ ಅವನೆಲ್ಲು ಸಲ್ಲವನಲ್ಲ...


ಬದುಕುವುದ ಕಲಿಯೂ
ಮಂಕು ದಿಣ್ಣೆ
ಬರಿಯ ಮೈ ಬೆಲಿಸಿದರೆ ಸಾಲದು
ಜೊತೆಗೆ ಬುದ್ಧಿಯೂ ಎಲಿಸಬೇಕು


ಜಗತ್ತಿನಲ್ಲಿ ತಾನೂ ಒಬ್ಬನಾಗಿ ಬಾಳಬೇಕು
ಎಲ್ಲರಿಗೂ ಮಾದರಿಯಾಗಬೇಕು
ಎಲ್ಲರಿಗೂ ಉಪಯುಕ್ತವಾಗಬೇಕು
ಹಾಗಿದ್ದರೆಯೇ ಜೀವನ...!


ವರುಣ್ ವಿವೇಕ್ ಜೆ 

No comments:

Post a Comment