Thursday, January 1, 2015

ನೀನೆ

ಬಾನಲ್ಲು ನೀನೆ,

ಬಾವಿಯಲ್ಲೂ ನೀನೆ....!
ಕಣ್ಣಲ್ಲೂ ನೀನೆ,
ಮಣಲ್ಲು ನೀನೆ.
ರೊಟ್ತಿಯಲ್ಲೂ ನೀನೆ,
ಕಸದ ತೊಟ್ಟಿಯಲ್ಲೂ ನೀನೆ.
ತೆಂಗಿನ ಗರಿಯಲ್ಲೂ ನೀನೆ,
ನಾಯಿಯ ಮರಿಯಲ್ಲೂ ನೀನೆ.
ನನ್ನ ಗುಬ್ಬಚ್ಚಿಯು ನೀನೆ,
ನನ್ನ ಅಜ್ಜಿಯು ನೀನೆ.
ಎಲ್ಲೆಲ್ಲು ನೀನೆ,
ನನ್ನ ಮನದಲ್ಲೂ ನೀನೆ.
ಎಲ್ಲೆಲ್ಲು ನೀನೆ ನನ್ನ ಬಾಳೆಲ್ಲ ನೀನೆ!!!
ನೀನೆ ನೀನೆ ನನ್ನಲ್ಲೂ ನೀನೆ
ಎಲ್ಲೆಲ್ಲು ನೀನೆ.....!!!


ವರುಣ್ ವಿವೇಕ್ ಜೆ 

ಎಲ್ಲಿರುವೆ ನೀನು??

ಯಾರೇ ನೀನು?

ನಿನ್ನ ಮೊಡಿಯೇನು?
ನನ್ನ ಬಾಳಿನ ಭಾನು,
ಎಂದು ಕಾಣಿಸುವೆ ನೀನು??


ಕಾಣದೆ ಕಾಡುವೆ ಏತಕೆ?
ಮುಂದೆ ಬರಲು ಅಂಜುವೆ ಏತಕೆ?
ಮಾತನಾಡಿಸಲು ಭಯವೇ??
ಏಕೆ ಹೀಗೆ ಕಾಡುವೆ?


ಎಲ್ಲಿರುವೆ ನೀನು?
ಅರಸುತ್ತ ಬರಲೇನು?
ನೀನು ಹೀಗೆ ಮಾಡಿದರೆ ಹೇಗೆ?
ಎಂದು ಕಾಣುವೆ ಎನಗೆ??


ಬೇಗನೆ ಎದುರಿಗೆ ಬಾ......
ನನ್ನ ಜೀವನದಲ್ಲಿ ಸಂತಸವ ತಾ..
ಕಾಯುವೆ ನಿನಗೆ ಸದಾ..
ನನ್ನ ಅಪ್ಪಿಕೋ ಬೇಗನೆ ಬಾ.

ವರುಣ್ ವಿವೇಕ್ ಜೆ 

Monday, September 23, 2013

ದುರಂತ ಪ್ರವಾಸ (ಕಥನ)

          ರಭಸವಾಗಿ ಗಾಳಿ ಮುಖಕ್ಕೆ ಹೊಡೆಯುತ್ತಿತ್ತು. ಕ್ಲಚ್-ಅನ್ನು ಹಿಡಿದು, ಗೇರ್ ಮುಂದಕ್ಕೆರಿಸಿದ ಬಾಳು, ಹೆದ್ದಾರಿಯಲ್ಲಿ ೮೦ ರ ವೇಗದಲ್ಲಿ ತನ್ನ ದ್ವಿಚಕ್ರ ವಾಹನವನ್ನು ಹಾರಿಸತೊಡಗಿದ. ಹಿಂದೆಯೇ ಕೂತಿದ್ದ ತಂಗಿ ಸಂಜನಾ, ವೇಗಕ್ಕೆ ಹೆದರದೆ ಅಣ್ಣನನ್ನು ಬಿಗಿಯಾಗಿ ಅಪ್ಪಿ ಕುಳಿತಿದ್ದಳು.

          ರಸ್ತೆಯನ್ನು ನೋಡುತ್ತಾ, ಹುಷಾರಾಗಿ ಚಲಿಸುತಿದ್ದ ಬಾಳು ತನ್ನ ದಿನದ ಶುರುವನ್ನು ಮೆಲುಕು ಹಾಕಿದ. ಎಲ್ಲ ತಾನು ಅಂದುಕೊಂಡಂತೆ ನಡೆಯಿತೆಂದು ಖುಷಿ ಪಟ್ಟನು.

          "ನಿಲ್ಲು!... ನಿಲ್ಲು!..." ಎಂದು ಸಂಜನಾ ಜೋರಾಗಿ ಕಿರುಚಿದಳು. ಕಲ್ಪನೆಯಲ್ಲಿ ಕಳೆದುಹೋಗಿದ್ದ ಬಾಳು ಎಚ್ಚರನಾಗಿ ಬ್ರೇಕ್ ಜೋರಾಗಿ ಒತ್ತಿದ. "ಏನು??!!... ಎನಾಇತು??!.." ಎಂದು ಗಾಬರಿಯಿಂದ ಕೇಳಿದ.

          "ನಾವೇಕಡೆ ಬರಬಾರದಿತ್ತು!...ಅಲ್ಲೇ ನಾನು ಬೋರ್ಡ್ ನೋಡಿದೆ. ಫಾಲ್ಸ್-ಗೆ ಆಕಡೆ ಹೋಗಬೇಕೆಂದು ಹಾಕಿತ್ತು." ಎನ್ನುತ್ತಾ ಕೈ ಸನ್ನೆ ಮಾಡಿದಳು.

          "ಸರಿ ಸರಿ... ಆ ಕಡೆನೇ ಹೋಗೋಣ..." ಎಂದು ಹೇಳಿ ವಾಹನವನ್ನು ತಿರುಗಿಸಿ ಸ್ವಲ್ಪ ದೂರ ಚಲಿಸಿ ಬಲಕ್ಕೆ ತಿರುಗಿದನು.

          ಅರ್ಧ ಘಂಟೆಯ ದಾರಿ, ನಂತರ ದೊಡ್ಡ ಹಸಿರು ಫಲಕ ಅವರನ್ನು ಸ್ವಾಗತಿಸಿತು. ಸಂಜನಾ ಹುಚ್ಚೆದ್ದು ಕುಣಿಯುತಿದ್ದಳು. ವಾಹನವನ್ನು ನಿಲುಗಡೆ ಸ್ಥಾನದಲ್ಲಿ ನಿಲ್ಲಿಸಿ, ತಂದಿದ್ದ ದೊಡ್ಡ ಬ್ಯಾಗ್-ಅನ್ನು ಬೆನ್ನಿಗೇರಿಸಿ, ತನ್ನ ೨೦ ವರ್ಷದ ತಂಗಿಯ ಭಿಜದ ಮೇಲೆ ಕೈ ಹಾಕಿ, ಇಬ್ಬರು ಮಾತನಾಡುತ್ತ ನಡೆದರು

          ಸಂಜನಳ ಖುಷಿ ಹೇಳತೀರಲಾಗದು. ಝರಿಯ ಸದ್ದು ದೂರ ದೂರಕ್ಕೂ ಕೇಳಿಸುತ್ತಿತ್ತು. ವರ್ಷಧಾರೆಯಾಗುತ್ತಿರುವ ಹಾಗೆ ಭಾಸವಾಗುತಿತ್ತು. ಕೊನೆಗೂ ಎತ್ತರದಲ್ಲಿ ತುತ್ತ ತುದಿಗೆ ಬಂದು ನಿಂತರು.

          ಹಾಲು ಬಡೆಯ ಮೇಲೆ ಜಿನುಗಿದಂತೆ ಎಡರುಗಡೆಯ ದೃಶ್ಯ ಕಂಡು ಬಂತು. ಸುಂದರವಾದ ನೋಟ. ದೂರ ದೂರಕ್ಕೆ ಚಾಚಿದ ಬೆಟ್ಟ. ಅಲ್ಲಲ್ಲಿ ಸಣ್ಣ ಸಣ್ಣ ಝರಿಗಳು. ದೂರದಲ್ಲಿ ಮನುಷ್ಯರು ಇರುವೆಗಳಂತೆ ಕಂಡು ಬಂದರು. ಜಲಪಾತದ ತುದಿಯಲ್ಲಿ, ರಭಸವಾಗಿ ಸುರಿಯುವ ನೀರನ್ನು ಅನುಭವಿಸುತ್ತ ಜನರು ಕುಳಿತಿದ್ದರು..

          "ವಾವ್!!..." ತಕ್ಷಣಕ್ಕೆ ಸಂಜನಳ ಬಾಯಿಂದ ಬಂದ ಪದ. ಬಾಳು ತನ್ನ ಬಾಯಿಯ ಹತ್ತಿರ ಕೈ ಹಿಡಿದು "ಹೋ......" ಎಂದು ಕಿರುಚಿದನು. ಪ್ರತ್ಯುತ್ತರವೆನ್ನುವಂತೆ ನಾಲ್ಕೈದು ಸತಿ ಅದೇ ಸದ್ದು ಕೇಳಿ ಬಂತು.

          "ನಡಿ ನಡಿ ಕೆಳಗೆ ಹೋಗೋಣ...! ಅಲ್ಲಿ ಇನ್ನು ಚೆನ್ನಾಗಿರುತ್ತೆ!. ಮಜಾ ಮಾಡಬಹುದು..ಬೇಗ ನಡಿ!!!" ಎನ್ನುತ್ತಾಳೆ ತಂಗಿಯ ಕೈಯನ್ನು ಹಿಡಿದೆಳೆದು ಮೆಟ್ಟಿಲತ್ತ ಓಡಿದ. ಅಣ್ಣನ ಊಟಕ್ಕೆ ಸರಿಸಮನಾಗಿ ಓಡಲು ಸಂಜನಾ ಒದ್ದಾಡಿದಳು.

'ಕೆಳಗೆ ಹೋಗಿ, ಮೊದಲು ಬಟ್ಟೆ ಬಿಚ್ಚಿ ನೀರಿಗೆ ಧುಮುಕಬೇಕು! ಸಂಜನಳಿಗೆ ಆಶ್ಚರ್ಯವಾಗುವಂತೆ ಅವಳಿಗೆ ಗೊತ್ತಾಗದಂತೆ ಅವಳ ಮೇಲೆ ನೀರೆರಿಚಬೇಕು. ಒಟ್ಟಿನಲ್ಲಿ ಫುಲ್ ಮಜಾ ಮಾಡಬೇಕು'. ಎಂದು ಮನದಲ್ಲಿ ನೆನೆದು ಮೆಟ್ಟಿಲನ್ನು ಇನ್ನು ಜೋರಾಗಿ ಇಳಿಯತೊಡಗಿದ.

ಬಂದೆ ಬಿಟ್ಟಿತು. ಜಲಪಾತದ ತುದಿ. ಅಲ್ಲಿಂದ ಸ್ವಲ್ಪ ಕೆಳಗೆ ಹರಿದು ಮತ್ತೊಂದಷ್ಟು ವಿಶಾಲ ಜಾಗ. ಅಲ್ಲಿಂದ ಜಲಪಾತ ಮುಂದುವರೆದು ಪ್ರಪಾತಕ್ಕೆ ನೀರು ಜಿಗಿಯುತ್ತದೆ.

ಬಂದಿದ್ದ ಜಾಗವಂತೂ ಇಬ್ಬರ ಕಣ್ಮನ ಸೆಳೆದಿತ್ತು. "ಇಲ್ಲಿ ಬ್ಯಾಗ್ ಇಡೋಣ..."ಎಂದು ಚೀರುತ್ತಾ ಸಂಜನಳಿಗೆ ಹೇಳಿದ ಬಾಲು. "ಹಾಂ?? ಏನ್ ಹೆಳಿದೋ ಏನು ಕೇಳಿಸಲಿಲ್ಲ!! ಇನ್ನೊಂದ್ ಸತಿ ಹೇಳು!" ಎಂದು ಅವಳು ಕಿರುಚಿದಳು.

"ಇಲ್ಲಿ ಬ್ಯಾಗ್ ಇಡೋಣ. ನಾನು ನೀರಿಗೆ ಇಳಿತೀನಿ" ಎಂದು ಇನ್ನು ಗಟ್ಟಿಯಾಗಿ ಹೇಳಿದ.

ಈ ಸತಿ ಏನೋ ಸ್ವಲ್ಪ ಕೇಳಿತು ಸಂಜನಳಿಗೆ. "ಸರಿ....!!" ಎಂದು ಕಿರುಚಿ ಅಲ್ಲ್ವ್ ಬಂಡೆಯ ಮೇಲೆ ಕುಳಿತಳು. ಬಾಲು ಬ್ಯಾಗ್-ಅನ್ನುಅವಳ ಹತ್ತಿರ ಇಟ್ಟು, ಅವಳನ್ನು ನೋಡಿ ಪ್ರೀತಿಯಿಂದ ಕಣ್ ಹೊಡೆದು ನಕ್ಕನು.

ಬಟ್ಟೆ ಕಳಚಿ, ಬರಿಯ ಪ್ಯಾಂಟ್-ನಲ್ಲಿ ನಿಂತ. ಬಿಸಿಲಿನ ಬೇಗೆ, ಪಕ್ಕದಲ್ಲಿ ನೀರು. ಇನ್ನೇನ್ ಬೇಕು? ಹಾಯದ ಭಾನುವಾರ. 'ಜಸ್ಟ್ ಪರ್ಫೆಕ್ಟ್' ಎಂದು ಮನದಲ್ಲಿ ನೆನೆದು ನೀರಿಗಿಳಿದನು.

ಅಲ್ಲೇ ಪಕ್ಕದಲ್ಲೊಂದು ಕುಟುಂಬ ತಮ್ಮ ನೀರಿನಾಟವನ್ನು ಮುಗಿಸಿ ಹಿಂದಿರುಗಲು ತಯಾರಿ ನಡೆಸಿತ್ತು. ಈಗ ಇವರಿಬ್ಬರನ್ನು ಬಿಟ್ಟು ಆ ಸ್ಥಳದಲ್ಲಿ ಯಾರೂ ಇರಲಿಲ್ಲ. ದೂರದ ದೊಡ್ಡ ಬಂಡೆಯಮೇಲೆ ಕೆಂಪು ಬಣ್ಣದಲ್ಲಿ ದೊಡ್ಡದಾಗಿ "ಅಪಾಯ" ಎಂದು ಬರಿದಿತ್ತು. ಇದನ್ನು ಲೆಕ್ಕಿಸದ ಇವರು, ತಮ್ಮ ಲೋಕದಲ್ಲಿ ಮುಳುಗಿದರು.

ಬಿಸಿಲಿನ ಬೇಗೆಗೆ ಮುಖ ಮುಚ್ಚಿ ಕುಳಿತಿದ್ದ ಸಂಜನಾ ಬೆಚ್ಚಿ ಬಿದ್ದಳು. ಅಚಾನಕ್ಕಾಗಿ ಅವಳ ತಲೆಯಿಂದ ನೀರು ಸುರಿಯುತಿತ್ತು. "ಹ್ಹ ಹ್ಹ ಹ್ಹ" ಎಂದು ಜೋರಾಗಿ ನಗುತಿದ್ದ ಅಣ್ಣ. ನಂತರ ಅವಳ ತಲೆಯ ಮೇಲೆ ಅಣ್ಣ ನೀರುಚಿದ್ದು ಅರಿವಾಯ್ತು.

"ಅಣ್ಣಾ!!!...." ಎಂದು ಗಟ್ಟಿಯಾಗಿ ಕೋಪದಿಂದ ಕೂಗಿ ಮಗುವಿನ ತರಹ ಅಳುವಂತೆ ಅನಕವಾಡಿದಳು. "ಬಟ್ಟೆಯೆಲ್ಲ ಒದ್ದೆ ಮಾಡಿಬಿಟ್ಟೆ!! ನೀನು ತುಂಬಾ ಕೆಟ್ಟವನು!" ಎಂದು ಪ್ರೀತಿಯಿಂದ ಬೈದಳು.

"ಅಲ್ಲೇ ಸ್ವಲ್ಪ ಹೊತ್ತು ಬಂದೆ ಮೇಲೆ ಒರಗಿಕೊ. ತಂತಾನೇ ಒಣಗಿ ಹೋಗುತ್ತೆ. ಹೋಗು" ಎಂದು ನಗುತ್ತಾ ಬಾಲು ಇನ್ನು ಹೆಚ್ಚು ನೇರೆರೆಚತೊಡಗಿದನು. ಖುಷಿಯಿಂದ, ಪ್ರೀತಿಯಿಂದ ಕೋಪದಿಂದ ಸಂಜನಾ ಎದ್ದು ಅಣ್ಣನ ಜೊತೆ ನೀರಿಗಿಳಿದಳು.

"ಅಬ್ಬಾ!!" ಎಂದು ಜೋರಾಗಿ ಕಿರುಚಿದಳು.
"ಇಲ್ಲ ಇಲ್ಲ... ನಾನ್ ನಿನ್ನ ಹಿಡಿದುಕೊಂಡಿದ್ದಿನಿ. ಭಯ ಪಡಬೇಡ." ಎಂದು ಜಾರಿ ಬೀಳುತಿದ್ದ ತಂಗಿಯನ್ನು ಹಿಡಿದು ಬಾಲು ಹೇಳಿದನು.
"ಆದ ಹೇಗೆ ನಿಂತಿದ್ಯಾ.! ಇಷ್ಟೊಂದು ಜೋರಾಗಿ ನೀರು ಹರಿತಾಇದೆ. ನಂಗಂತೂ ನ್ಲ್ಲೋಕೆ ಆಗ್ತಿಲ್ಲ. ನಾನು ವಾಪಸ್ ಹೋಗ್ತೀನಪ್ಪ. ನೀನು ಬಾ. ಬೇಡ ಹೋಗೋದು!" ಎಂದು ಭಯದಿಂದ ನುಡಿದಳು ಸಂಜನಾ.
"ನೀನ್ ಹೋಗು ನಾನ್ ಬರ್ತೀನಿ"
"ತುಂಬಾ ಮುಂದೆ ಹೋಗಬೇಡ. ಆಳ ಇದೆ. ಹುಷಾರು!"
"ಸರಿ ಸರಿ. ನೀನ್ ಹೋಗ ಕೂತ್ಕೋ" ಎಂದ ಬಲು.

ನೀನಿನಲ್ಲಿ ನೆಂದು ತೊಪ್ಪೆಯಾಗಿದ್ದ ಸಂಜನಾ ಬಿಸಿಲಿನಲ್ಲಿ ಬಂದು ಕುಳಿತಳು. ಜಡೆಯನ್ನು ಬಿಚ್ಚಿ ಒಣಗಿಸತೊದಗಿದಳು.ಆಗಾಗ ಅಣ್ಣನನ್ನು ನೋಡುತ್ತಾ ಕುಳಿತಳು.

ಹಾಲಿನಂತೆ ಉಕ್ಕಿ ಮೇಲಿಂದ ಹರಿಯುತಿದ್ದ ನೀರನ್ನು ನೋಡಿ ಕುಳಿತ ಸಂಜನಾ ಅಚಾನಕ್ಕಾಗಿ ಎಚ್ಚೆತ್ತು ಕುಳಿತಳು.
ಯಾರೋ ತನ್ನ ಹೆಸರು ಕರೆದಂತಾಯಿತು.
"ಸಂಜನಾ....ಸಂಜನಾ...!!" ಎಂದು ಅಣ್ಣ ಜೋರಾಗಿ ಕೂಗುತಿದ್ದ.
"ಏನು??..."
"ನಾನ್ ಆಕಡೆಯ ಬಂಡೆಗೆ ಹೋಗಿ ಕೂತ್ಕೋತೀನಿ. ಆ ಕಡೆ ಚೆನ್ನಾಗಿದೆ, ನೀನ್ ಅಲ್ಲೇ ಇರು ಬಂದು ಬಿಡ್ತೀನಿ. ಆಯ್ತಾ??"
"ಬೇಡಾ...." ಎಂದು ಸಂಜನಾ ನೀರಿನತ್ತ ಓಡ ತೊಡಗಿದಳು.
"ಏನು ಭಯ ಪಡಬೇಡ. ಇಲ್ಲೇ ಇರೋದು. ನೋಡು ಇಲ್ಲೇ ಸಿಗುತ್ತೆ ಬಂದೆ ನಂಗೆ."
"ಆದ್ರೂ ಬೇಡಾ ಹೋಗೋದು. ಹೋಗಬೇಡ.!!"
"ಇಲ್ಲೇ ಇದೆ ಪ. ಬಂದುಬಿಡ್ತೀನಿ." ಎಂದು ನಿಧಾನವಾಗಿ ನಡೆದ ಬಾಲು.


ನೀರು ಬಲು ಜೋರಾಗಿತ್ತು. ಬಾಲುವಿನ ಕಾಲು ಪಾಚಿ ಕಟ್ಟಿದ ಕಲ್ಲುಗಳ ಮಧ್ಯ ಜಾಗವನ್ನು ಹುಡುಕುತ್ತಿತ್ತು. ಕೈ ಬಂಡೆಯನ್ನು ಬಿಗಿಯಾಗಿ ಹಿಡಿದಿತ್ತು. ಧೈರ್ಯ ಮನದಲ್ಲಿದ್ದರು ಹೃದಯದ ಬಡಿತದ ವೇಗ ಹೆಚ್ಚಿತ್ತು. ಒದ್ದೆಯಾದ ಕೂದಲಿನಿಂದ ನೀರು ತೊಟ್ಟಿಕ್ಕುತ್ತಿತ್ತು. ಹಿಂದೆ ತಿರುಗಿ ತಂಗಿಯ ಮುಖ ನೋಡಿ ಆಶ್ವಾಸನೆಯ ನಗು ಬೀರಿದನು.

ಬಲಕ್ಕೆ ತಿರುಗಿ ಮೇಲಿಂದ ಧುಮ್ಮಿಕ್ಕುತಿದ್ದ ನೀರನ್ನು ನೋಡಿದನು. ಜಾಗರೂಕತೆಯಿಂದ ಕಾಲನಿಟ್ಟು ಮುಂದಕ್ಕೆ ನಡೆದನು.
ನೀರಿನ ರಭಸವನ್ನು ಮೀರಿ ನಡೆಯುತ್ತಿದ್ದ ಬಾಲು. 'ಪಕ್ಕದ ಬಂಡೆ ಇನ್ನೇನ್ ಸ್ವಲ್ಪವೇ ದೂರವಿದೆ. ನಾನು ಹೋಗಬಹುದು' ಎಂದು ಧೃಡ ಮನಸ್ಸು ಮಾಡಿ ಮತ್ತೊಂದು ಹೆಜ್ಜೆ ಇಟ್ಟನು.

'ಬರಿ ಈ ಕಡೆ ಇಂದ ಆಕಡೆ, ಅಷ್ಟೇ.!' ಹಿಂದಿನ ಬಂಡೆಯ ಮೇಲಿನಿಂದ ಕೈಯನ್ನು ಬಿಟ್ಟು ನಿಂತನು. ಇನ್ನೊಂದು ಹೆಜ್ಜೆ ಇಟ್ಟನು. ದೊಡ್ಡ ಬಂಡೆ ಕಾಲಿಗೆ ಸಿಕ್ಕಿತು. ಪಾಚಿ ಕಟ್ಟಿದ್ದರಿಂದ ಕಾಲು ಜಾರಿತು.! ಎದೆಯ ಬಡಿತ ಇನ್ನು ಹೆಚ್ಚಿತು!
ತನ್ನ ತಾನು ಕಾಪಾಡಲು, ಬಲಗೈ ಕೆಳಗೆ ಹೋಗಿ ನೀರನ್ನು ಮುಟ್ಟಿತು. ಕಣ್ಣು ಆಕಾಶ ನೋಡಿತು.. ನೀರು ಕಣ್ಣಿಗೆ ಹೋದ ಕಾರಣ ಬಾಲು ಕಣ್ ಮುಚ್ಚಿದ. ಕ್ಷಣ ಮಾತ್ರದಲ್ಲೇ ಅವನು ಜಲಪಾತದ ತುದಿಯತ್ತ ತೇಲುತ್ತ ಹೋಗುತ್ತಿದ್ದ!

ತಂಗಿಯ ಕೂಗು ಕಿವಿಗೆ ತಟ್ಟುತ್ತಿತ್ತು. ಆದರೂ ಅವನು ಅಮಯಕನಾಗಿ ನಿಸ್ಸಹಾಯಕನಾಗಿ ನೀರಿನಲ್ಲಿ ತೇಲುತ್ತಾ ಮುಂದೆ ಹೋಗುತ್ತಿದ್ದ ಬಾಲು. ತಂಗಿಯ ಕೂಗು ಇನ್ನು ಜೋರಾಗಿತ್ತು, ಅವಳಿಗೇನು ಮಾಡಬೇಕೆಂದೇ ತೋಚದಂತಾಗಿತ್ತು.

ಬಾಲು ತುತ್ತ ತುದಿಗೆ ಬಂದುಬಿಟ್ಟನು. ಮೇಲಿನಿಂದ ಮುಂದಿದ್ದ ಹಸಿರು ರಾಶಿ ಚಿಕ್ಕ ಆಟದ ಮರಗಳಂತೆ ಕಾಣುತ್ತಿದ್ದವು.
ಬಾಲು ತುದಿಯಿಂದ ಕೆಳಕ್ಕೆ ಬೀಳ ತೊಡಗಿದನು. ಮನದಲ್ಲಿ ದುಗುಡ, ಭಯ, ಆತಂಕ ಎಲ್ಲ ಒಮ್ಮೆಲೇ ಕೂಡಿ ಮನಸಲ್ಲಿ ಬಂದವು. ಕೇವಲ ೬ ಸೆಕೆಂಡುಗಳಲ್ಲಿ ಬಾಲು ನೀರನ್ನು ಮುಟ್ಟಿದನು. ಸಾವಿರ ಚೂರಿಗಳು ಒಮ್ಮೆ ಇರಿದಂತಾಗಿತ್ತು. ಕಣ್ಣು ಬಿಡುವಷ್ಟರಲ್ಲಿ, ಏನ್ ಆಗಿದೆ ಎಂದು ಅರಿಯುವಷ್ಟರಲ್ಲಿ ಆಳದ ನೀರು ಬಾಲುವಿನ ಮುಖಕ್ಕೊಡಿಯಿತು. ಕಿವಿಯೊಳಗೆ ನೀರು ತುಂಬಿ ಹೊರ ಜಗತ್ತಿನ ಸದ್ದು ಕಡಿಮೆಯಾಗುತ್ತ ಬಂತು.

ಆ ಕ್ಷಣದಲ್ಲೇ ತಲೆಯ ಹಿಂದೆ ಏನು ಜೋರಾಗಿ ಬಡಿದಂತೆ ಅನಿಸಿತು....


ಜಗವೆಲ್ಲ ಖಾಲಿ... ಕಪ್ಪು ದೃಶ್ಯ ಆವರಿಸಿತು....... ಎಲ್ಲೆಡೆ ಶಾಂತಿ...


                                 ********************************************


---------------ವರುಣ್ ವಿವೇಕ್ ಜೆ

Monday, July 15, 2013

ಮೂರು ದಿನದ ಮಾಯಾಜಾಲ


ಎಂಥದಿದು??
ಎಂದೂ, ಯಾರೂ ಕಂಡಿರದ
ಮಾಯಾಜಾಲವಿದು.....!!!
ಈ ಜೀವನ ಎಂಬುದು.
ಏನೂ ಹೊತ್ತಿ ಬರುವುದಿಲ್ಲ,
ಈ ಭೂಮಿಯ ಮೇಲೆ.
ಏನೂ ಹೊತ್ತಿ ಹೋಗುವುದಿಲ್ಲ
ಆಯಸ್ಸು ಮುಗಿದ ಮೇಲೆ.




ಬೇಡುವುದ ಬಿಡುವುದಿಲ್ಲ,
ಸಿಗುವವರೆಗೂ ನೆಮ್ಮದಿ ಇಲ್ಲ.!
ಕಾಡಿ ಬೇಡಿ ಪಡೆದರೂ,ಜೊತೆ
ಬಾಳುವುದು ಕಿಂಚಿತ್ತಷ್ಟೇ!




ಎಷ್ಟೇ ಎಚ್ಚರವಿದ್ದರು,
ಏನೇ ಕಷ್ಟಪಟ್ಟರೂ
ಸಂಭಾಲಿಸಲಾಗುವುದಿಲ್ಲ ಅದ್ದನ್ನ
ದೊರೆತ ಆ ಮುತ್ತನ್ನ.




ಮಣ್ಣಿನ ದೇಹವಿದು,
ಅಶಾಶ್ವತ ಅದು.
ನಾವೀ ಭೂಮಿಯ ಮೇಲಿರುವುದು
ಕೇವಲ ಮೂರೇ ದಿನವದು.




ಮಾಡುವುದು ಬೇಕಾದಷ್ಟಿದೆ,
ಜೀವನ ಅಷ್ಟೇ ಚಿಕ್ಕದಿದೆ.
ಏನಿದೆ ಇಲ್ಲಿನ ಆತಿಥ್ಯ.......
ನೀನು ಗಳಿಸುವೆ, ಅದೇ ಸತ್ಯ..




ನಿನಗೊಸ್ಕರವಲ್ಲಡಿದರು,
ನಿನ್ನ ಪ್ರೀತಿ ಪಾತ್ರರಿಗಾದರೂ,
ಅವರ ಸಂತೋಷಕ್ಕದರೂ,
ನೀನು ಜೀವಿಸಿರು.......




ಎಲ್ಲರಿಗು ಸಂತೋಷವ
ನೀ ಕೊಡು
ನಿನ್ನೀ ಭೂಮಿಯ ಯಾತ್ರವ
ಹಸನವನ್ನಾಗಿ ಮಾಡು.




ಪರರಿಗೆ ಉಪಯುಕ್ತವಾಗಿರು,
ನಗುಮುಖ ಎಲ್ಲರಲ್ಲೂ ಬೀರಿಸು,
ನಿನ್ನ ನೆನಪನ್ನು ಸದಾ ಉಳಿಸು,
ಆಗಲೇ ಸಾರ್ಥಕ ನಿನ್ನೆ ಬದುಕು..!!


ವರುಣ್ ವಿವೇಕ್ ಜೆ

ರೀತಿ ನೀತಿ


ಬದುಕಿದ್ದರೇನು ಫಲ...?
ಇದ್ದೂ ಉಪಯೋಗವಿಲ್ಲ,
ಸಮಾಜಕ್ಕೆ, ಪೋಷಕರಿಗೆ ಏನೂ
ಉಪಯೋಗವಿಲ್ಲದವನಿದ್ದೇನು ಫಲ??


ಅವನಿದ್ದೂ ಸತ್ತಂತೆ.
ಜೀವಂತ ಶವ!!!
ಏನೂ ಸಾಧಿಸದವ,
ಕಲ್ಪನೆಗೂ ಮೀರಿದ ಕೀಳು ಮನುಷ್ಯನಂತೆ..!


ಭೂಮಿಗೆ ಭಾರ,
ಸುಮ್ಮನೆ ದವಸ ಧಾನ್ಯಗಳ ಹರಣ
ಹನವಿಲ್ಲದ ಕುದುರೆಯಂತೆ
ಗುರಿ ಇರದ ಜೀವನ ಅವನದ್ದು.


ಜೀವನವೆಂಬ ರಣರಂಗದಲ್ಲಿ
ಕೈಲಾಗದವನಂತೆ ಕುಳಿತು
ಅತ್ತ ಯುಧಕ್ಕಿಲ್ಲ,ಇತ್ತ ಏನಕ್ಕೂ
ಪ್ರಯೋಜನವಿಲ್ಲದವನದ್ದು ಕೀಳು ಜನುಮ!!


ಊಟ ತಿಂದ ಮನೆಯ
ಕಾಯುವುದು ನೀಯತ್ತು ಪ್ರಾಣಿಯ ಗುಣ
ಹುಟ್ಟಿ, ಬೆಳೆದು ಬಂದ ಮನೆಗೆ
ಏನೂ ಕೊಡದೆ ಬದುಕ್ಕಿದ್ದರೇನು ಫಲ??


ಎಂಥ ಜೀವನ?????
ಯಾವುದರಲ್ಲೂ ಮುಂದಿಲ್ಲ...
ಯಾವ ಕೆಲಾವೂ ಬರುವುದಿಲ್ಲ
ಹೀಗಿದ್ದರೆ ಅವನೆಲ್ಲು ಸಲ್ಲವನಲ್ಲ...


ಬದುಕುವುದ ಕಲಿಯೂ
ಮಂಕು ದಿಣ್ಣೆ
ಬರಿಯ ಮೈ ಬೆಲಿಸಿದರೆ ಸಾಲದು
ಜೊತೆಗೆ ಬುದ್ಧಿಯೂ ಎಲಿಸಬೇಕು


ಜಗತ್ತಿನಲ್ಲಿ ತಾನೂ ಒಬ್ಬನಾಗಿ ಬಾಳಬೇಕು
ಎಲ್ಲರಿಗೂ ಮಾದರಿಯಾಗಬೇಕು
ಎಲ್ಲರಿಗೂ ಉಪಯುಕ್ತವಾಗಬೇಕು
ಹಾಗಿದ್ದರೆಯೇ ಜೀವನ...!


ವರುಣ್ ವಿವೇಕ್ ಜೆ 

ಯಾಂತ್ರಿಕ ಬದುಕು


ಮನುಷ್ಯನೊಬ್ಬ ಯಾಂತ್ರಿಕನಾಗಿದ್ದಾನೆ...
ತಾನೊಬ್ಬ ಜೀವಿ ಎಂಬುದ ಮರೆತಿದ್ದಾನೆ..!
ಅವನದ್ದು ಬರಿಯ ಯಾಂತ್ರಿಕ ಬದುಕು
ಈ ಪದ್ಯವು ಅವನ ದಿನಚರಿಯ ಒಂದು ತುಣುಕು...


ಬೆಳಿಗ್ಗೆ ಬೇಗ ಏಳು
ತನ್ನ ಕಾರ್ಯಗಳನ್ನೆಲ್ಲ ಮುಗಿಸು,
ಕೆಲಸಕ್ಕೆ ತಯಾರಿ ನಡೆಸು
ಆ ಕೆಲಸದಲ್ಲಿ ಮನೆ-ಮತವನ್ನು ಮರೆತು!


ಪ್ರೀತಿ-ಪ್ರೇಮ ಬತ್ತಿದೆ..
ಮನುಷ್ಯತ್ವ ಸತ್ತಿದೆ!!
ಮನೆಯವರ ಜತೆಗೆ ಕಾಲಹರಣ
ಈಗ ಬರಿಯ ಗಾಳಿಮಾತಾಗಿದೆ!..


ಮನಶ್ಯಾಂತಿ ದೊರಕದು,
ಮನಸೋ ಇಚ್ಛೆ ನಡೆಯಲಾಗದು..
ಈ ದಿನಚರಿ ಅವನನ್ನು ಕಟ್ಟಿ ಹಾಕಿದೆ
ನರಳುತಿದ್ದಾನೆ ಅವನು ಇದರಿಂದ ಹೊರ ಬರಲಾಗದೆ


ಮನಸ್ಸು ಆರೋಗ್ಯವಾಗಿಲ್ಲ,
ದೇಹದಲ್ಲಿ ಶಕ್ತಿಲ್ಲ
ಆದರೂ ಮನೆಗೆ ದುಡಿಯಬೇಕಲ್ಲಾ...?!?!!!
ಎಂಬ ಚಿಂತೆ ತಪ್ಪಿದಲ್ಲ


ಕೆಲಸ ಕೆಲಸ ಕೆಲಸಾ..
ಇದರಲ್ಲೇ ಮರೆತ್ತಿದ್ದಾನೆ ಒಲವ
ಮಕ್ಕಳ ಜೊತೆ ಕಾಲ ಕಳೆಯದು..
ಅದು ಒಂದು ಜೀವನವ??!!


ಏನಿದು!!??
ಎಲ್ಲಿ ಹೊರಟಿದೆ ಜೀವನವೆಂಬ ಪಯಣವು??
ದಿಕ್ಕಿಲ್ಲ,ಗುರಿ ಇಲ್ಲ!!
ಕಪ್ಪು ಬಿಳುಪಾಯಿತು ಇಡೀ ಬದುಕೆಲ್ಲ!


ಪುಸ್ತಕದಲ್ಲಿ ಕಂಡೆ ಪ್ರೀತಿ,
ಚಲನಚಿತ್ರದಲ್ಲಿ ನೋಡಿದೆ ಪ್ರೀತಿ..
ನಮ್ಮ ಜೀವೆನದಲ್ಲಿಲ್ಲವೆಂಬ ಭ್ರಾಂತಿ
ನಡೆಯಲೇಬೇಕು ಇದಕ್ಕೊಂದು ಕ್ರಾಂತಿ..


ಸಾಕಪ್ಪಾ ಸಾಕು!!
ಈ ಯಾಂತ್ರಿಕ ಬದುಕು..
ಮಾತನಾಡಿದೆ ದುಡ್ಡೇ ಎಲ್ಲದಕ್ಕೂ..
ಅಂತ್ಯ ಹಾಡೋಣ ನಾವೆಲ್ಲರೂ ಇದಕ್ಕೆ


ಕಳಚಿಹಾಕೋಣ  ಈ ಮುಖವಾಡವನ್ನ..
ಮರುಜೀವ ಕೊಡೋಣ ಮನುಷ್ಯತ್ವಕ್ಕಿನ್ನು
ಪ್ರೀತಿ ಹುಟ್ಟಲಿ ಎಲ್ಲರ ಮನದಲ್ಲಿ
ಗೌರವ ಬೆಳೆಯಲಿ ಒಬ್ಬರಿಗೊಬ್ಬರಲ್ಲಿ..


ಇದೆ ನನ್ನ ಆಶಯ
ಮರೆಯೋಣ ಎಲ್ಲರು ಯಾಂತ್ರಿಕತೆ ಎಂಬ ಪದವ...



 ವರುಣ್ ವಿವೇಕ್ ಜೆ